For the best experience, open
https://m.samyuktakarnataka.in
on your mobile browser.

೨ಎ ಮೀಸಲಾತಿ: ಅಧಿವೇಶನದವರೆಗೆ ಸರ್ಕಾರಕ್ಕೆ ಗಡುವು

08:53 PM Sep 22, 2024 IST | Samyukta Karnataka
೨ಎ ಮೀಸಲಾತಿ  ಅಧಿವೇಶನದವರೆಗೆ ಸರ್ಕಾರಕ್ಕೆ ಗಡುವು

ಬೆಳಗಾವಿ: ಲಿಂಗಾಯತ ಪಂಚಮಸಾಲಿಗೆ ೨ಎ ಮೀಸಲಾತಿ ಕೊಡದಿದ್ದರೆ ಮುಂಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳನ್ನು ಸೌಧದೊಳಗೆ ಬಿಟ್ಟುಕೊಡುವುದು ಬೇಡ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಪಂಚಮಸಾಲಿ ವಕೀಲರ ಸಭೆಯಲ್ಲಿ ಮಾತನಾಡಿದ ಅವರು, ಈ ಸಲದ ಹೋರಾಟ ಕೊನೆಯದಾಗಬೇಕು. ಬರುವ ಅಧಿವೇಶನದೊಳಗೆ ಮೀಸಲಾತಿ ಕೊಡದಿದ್ದರೆ ಉಗ್ರ ಸ್ವರೂಪದ ಹೋರಾಟಕ್ಕೆ ಸಿದ್ಧರಾಗಬೇಕೆಂದು ಅವರು ಕರೆ ನೀಡಿದರು.
ಈ ಸಲದ ಹೋರಾಟದಲ್ಲಿ ಯಾರೂ ಬರೀ ನಾಟಕ ಮಾಡುವಂತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಆಸಕ್ತಿ ಇಲ್ಲ. ಇನ್ನು ನಮ್ಮದೇನು ಗತಿ ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದರು. ಈ ಮೀಸಲಾತಿ ಹೋರಾಟದಲ್ಲಿ ಯಾರೂ ಸ್ವಾರ್ಥ ವಿಚಾರ ಮಾಡಬೇಡಿ. ಬಡವರಿಗಾಗಿ ನಾವು ಹೋರಾಟ ಮಾಡಿ ಮೀಸಲಾತಿ ಪಡೆದುಕೊಳ್ಳಬೇಕಿದೆ ಎಂದರು.

Tags :