For the best experience, open
https://m.samyuktakarnataka.in
on your mobile browser.

14 ಕಡೆಯಲ್ಲಿ ಲೋಕಾಯುಕ್ತ ದಾಳಿ

01:47 PM Aug 22, 2023 IST | Samyukta Karnataka
14 ಕಡೆಯಲ್ಲಿ ಲೋಕಾಯುಕ್ತ ದಾಳಿ

ಬೆಂಗಳೂರು: ಲೋಕಾಯುಕ್ತ ಅದೀಕಾರಿಗಳು ಇಂದು 14 ಕಡೆ ದಾಳಿ ನಡೆಸಿದ್ದಾರೆ. ಸರ್ವೆ ಸೂಪರ್‌ವೈಸರ್ ಕೆ.ಟಿ. ಶ್ರೀನಿವಾಸ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಹಾಗೂ ಐದು ಬಾರ್‌ ಲೈಸೆನ್ಸ್‌ ಪಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ. ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅವರ ಆಸ್ತಿ ನೋಡಿ ಶಾಕ್ ಆಗಿದ್ದಾರೆ. ತನ್ನ ಸಹೋದರರು ಹಾಗೂ ಸಂಬಂಧಿಕರ ಹೆಸರಿನಲ್ಲಿ 5 ಮದ್ಯ ಮಾರಾಟ ಲೈಸೆನ್ಸ್ ಪಡೆದಿರುವ ಅವರು, ತನ್ನ ಸಹೋದರಿ ಹಾಗೂ ಕುಟುಂಬಸ್ಥರ ಹೆಸರಲ್ಲಿ ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ ಎಂದು ತಿಳಿದುಬಂದಿದೆ. ಕೆ ಆರ್ ಪುರಂ ತಾಲ್ಲೂಕು ಕಚೇರಿ ಸೇರಿದಂತೆ 14 ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಮನೆ ಹಾಗೂ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಏಕಕಾಲದಲ್ಲಿ ಬೆಂಗಳೂರು ಮತ್ತು ತುಮಕೂರು ಸೇರಿದಂತೆ 14 ಕಡೆ ದಾಳಿ ನಡೆಸಿದ್ದಾರೆ.