For the best experience, open
https://m.samyuktakarnataka.in
on your mobile browser.

7 ಹಂತದ ಚುನಾವಣೆಯಿಂದ ಅಭಿವೃದ್ಧಿ ಕುಂಠಿತ

08:10 PM Mar 16, 2024 IST | Samyukta Karnataka
7 ಹಂತದ ಚುನಾವಣೆಯಿಂದ ಅಭಿವೃದ್ಧಿ ಕುಂಠಿತ

ಬೆಂಗಳೂರು: ಮೂರ್ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಸಿದ್ದರೆ ಒಳ್ಳೆಯದಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಚುನಾವಣೆ ಘೋಷಣೆಯಾದ ಬಳಿಕ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ಅವರು, 7 ಹಂತ ಚುನಾವಣೆ ಬಹುತೇಕ ಎಲ್ಲ ಅಭಿವೃದ್ಧಿ ಕಾರ್ಯಗಳು 70-80 ದಿನಗಳ ಕಾಲ ಸ್ಥಗಿತಗೊಳ್ಳುತ್ತವೆ. ನೀತಿ ಸಂಹಿತೆಯಿಂದಾಗಿ ವಸ್ತುಗಳು ಪೂರೈಕೆಯಾಗುವುದಿಲ್ಲ. ಜನರೂ ಹೊರ ಹೋಗುವುದಿಲ್ಲ. ಹೀಗಾದರೆ ದೇಶ ಹೇಗೆ ಪ್ರಗತಿ ಸಾಧಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.