For the best experience, open
https://m.samyuktakarnataka.in
on your mobile browser.

BJPಯ ಸ್ಥಾನ 25 ರಿಂದ 17ಕ್ಕೆ ಕುಸಿದಿದ್ಯಾಕೆ?

01:34 PM Jun 06, 2024 IST | Samyukta Karnataka
bjpಯ ಸ್ಥಾನ 25 ರಿಂದ 17ಕ್ಕೆ ಕುಸಿದಿದ್ಯಾಕೆ

ಶಿವಮೊಗ್ಗ: ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ 25 ಸೀಟು ಗೆದ್ದಿತ್ತು. ಈ ಚುನಾವಣೆಯಲ್ಲಿ 17 ಸ್ಥಾನ ಗೆಲ್ಲುವ ಮೂಲಕ ದುಸ್ಥಿತಿಗೆ ಬಂದಿದೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಒಂದೇ ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಅಪ್ಪ ಮಕ್ಕಳ ಕೈಯಲ್ಲಿ ಪಕ್ಷದ ಇದೆ ಅದನ್ನ ಮುಕ್ತ ಮಾಡಬೇಕಿದೆ ಎಂದರು.
ನನಗೆ ಆರಂಭದಲ್ಲಿ ನಿರೀಕ್ಷಗೂ ಮೀರಿದ ಜನರ ಬೆಂಬಲ ಸಿಕ್ಕಿತ್ತು. ಆದರೆ ಜನರು ಮಾತ್ರ ಮೋದಿ ಮರೆಯಲಿಲ್ಲ. ಬಿಜೆಪಿಯಲ್ಲಿ ಸಾಕಷ್ಟು ನ್ಯೂನ್ಯತೆ ಇದೆ. ಪಕ್ಷ ಶುದ್ಧೀಕರಣವಾಗಬೇಕು ಎಂದರು.