For the best experience, open
https://m.samyuktakarnataka.in
on your mobile browser.

BSY ದೂರದೃಷ್ಟಿ ಯೋಜನೆಯ ಸಂಕಲ್ಪ ಈಡೇರುತ್ತಿದೆ

11:23 AM Jul 09, 2024 IST | Samyukta Karnataka
bsy ದೂರದೃಷ್ಟಿ ಯೋಜನೆಯ ಸಂಕಲ್ಪ ಈಡೇರುತ್ತಿದೆ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದೂರದೃಷ್ಟಿ ಯೋಜನೆಯಾದ ಛತ್ತೀಸ್ ಗಢ ಉಷ್ಣ ವಿದ್ಯುತ್ ಸ್ಥಾವರದ ಯೋಜನೆಯ ಸಂಕಲ್ಪ ಈಡೇರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಛತ್ತೀಸ್ ಗಢ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯ ಅನುಮತಿ ಪ್ರಕ್ರಿಯೆಗೆ ಕೇಂದ್ರದಲ್ಲಿ ವೇಗ ದೊರೆತಿದ್ದು, ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಪೂರಕವಾಗಿ ಸ್ಪಂದಿಸುತ್ತದೆ ಎನ್ನುವುದಕ್ಕೆ ಈ ಯೋಜನೆ ಒಂದು ಸಾಕ್ಷಿಯಾಗಿದೆ. ಆ ಮೂಲಕ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಾರಂಭಿಸಿದ್ದ ದೂರದೃಷ್ಟಿ ಯೋಜನೆಯೊಂದರ ಸಂಕಲ್ಪ ಈಡೇರುತ್ತಿದೆ. ಬರಗಾಲದಲ್ಲಿ ವಿದ್ಯುತ್ ಕ್ಷಾಮ ನೀಗಿಸಿ, ಭವಿಷ್ಯತ್ತಿನಲ್ಲಿನ ವಿದ್ಯುತ್ ಕೊರತೆ ನೀಗಿಸಬಲ್ಲ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯೋಜನೆ ಜಾರಿಯಾಗಲು ಕ್ಷಿಪ್ರಗತಿಯಲ್ಲಿ ಹೆಜ್ಜೆ ಮುಂದಿಟ್ಟು ಯೋಜನೆ ಕಾರ್ಯಗತವಾಗುವಂತೆ ಬದ್ಧತೆಯಿಂದ ಕಾರ್ಯನಿರ್ವಹಿಸಲಿ ಎಂದಿದ್ದಾರೆ.