For the best experience, open
https://m.samyuktakarnataka.in
on your mobile browser.

T 20 ವಿಶ್ವಕಪ್‌ ವಿಜೇತರಿಗೆ ಭವ್ಯ ಸ್ವಾಗತ

11:19 AM Jul 04, 2024 IST | Samyukta Karnataka
t 20 ವಿಶ್ವಕಪ್‌ ವಿಜೇತರಿಗೆ ಭವ್ಯ ಸ್ವಾಗತ

ನವದೆಹಲಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಟೀಮ್ ಇಂಡಿಯಾ ಆಟಗಾರರು ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಏರ್‌ಇಂಡಿಯಾದ ವಿಶೇಷ ವಿಮಾನ ಬಂದಿಳಿದಿರು.
ಈ ವೇಳೆ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ಸಂರ್ಭಮದಲ್ಲಿ ಆಟಗಾರರು ಹೆಜ್ಜೆ ಹಾಕಿದರು.

ಪ್ರಧಾನಿ ಭೇಟಿ ಆಗಲಿರುವ ಟೀಮ್‌ ಇಂಡಿಯಾ: 11 ಗಂಟೆಗೆ ಟೀಮ್ ಇಂಡಿಯಾದ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ವಾಂಖೆಡೆ ಮೈದಾನದಲ್ಲಿ ವಿಜಯೋತ್ಸವ: ಇಂದು ಸಂಜೆ ವಾಂಖೆಡೆ ಮೈದಾನದಲ್ಲಿ ವಿಜಯೋತ್ಸವ ಆಚರಿಸಲಾಗುವುದು. ಅದಕ್ಕೂ ಮುನ್ನ ಆಟಗಾರರು ತೆರೆದ ಬಸ್‌ನಲ್ಲಿ ನರಿಮನ್ ಪಾಯಿಂಟ್‌ನಿಂದ ವಾಂಖೆಡೆ ಮೈದಾನದವರೆಗೆ ಸಂಚರಿಸಲಿದ್ದಾರೆ.