UP ಯುವಕರ ಕೌಶಲ್ಯವನ್ನು ಜಗತ್ತು ಈಗ ಗಮನಿಸುತ್ತಿದೆ
04:06 PM Dec 17, 2024 IST | Samyukta Karnataka
ಯುಪಿಯ 5600 ಕ್ಕೂ ಹೆಚ್ಚು ಯುವಕರು ಕೆಲಸ ಮಾಡಲು ಇಸ್ರೇಲ್ಗೆ ಹೋಗಿದ್ದಾರೆ.
ಉತ್ತರ ಪ್ರದೇಶ : ನಿನ್ನೆ ಕಾಂಗ್ರೆಸ್ ನಾಯಕಿಯೊಬ್ಬರು ಸಂಸತ್ತಿನಲ್ಲಿ ಪ್ಯಾಲೆಸ್ತೀನ್ ಎಂದು ಬರೆದ ಬ್ಯಾಗ್ ಅನ್ನು ಹೊತ್ತೊಯ್ದರು ಆದರೆ ನಮ್ಮಲ್ಲಿ ಯುಪಿ ಯುವಕರು ಕೆಲಸಕ್ಕಾಗಿ ಇಸ್ರೇಲ್ಗೆ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಯುಪಿಯ 5600 ಕ್ಕೂ ಹೆಚ್ಚು ಯುವಕರು ಕೆಲಸ ಮಾಡಲು ಇಸ್ರೇಲ್ಗೆ ಹೋಗಿದ್ದಾರೆ. ಭದ್ರತೆಯನ್ನು ಖಾತರಿಪಡಿಸಲಾಗಿದೆ. ಇತ್ತೀಚೆಗೆ, ಇಸ್ರೇಲ್ ರಾಯಭಾರಿ ಬಂದಾಗ, ಅವರು ಯುಪಿಯಿಂದ ಹೆಚ್ಚಿನ ಯುವಕರನ್ನು ಕರೆದುಕೊಂಡು ಹೊಗಲು ನಾನು ಬಯಸುತ್ತೇನೆ ಎಂದು ಹೇಳಿದರು. ಯುಪಿಯ ಯುವಕರ ಕೌಶಲ್ಯ ಶಕ್ತಿಯನ್ನು ಜಗತ್ತು ಈಗ ಗಮನಿಸುತ್ತಿದೆ ಎಂದರು.