For the best experience, open
https://m.samyuktakarnataka.in
on your mobile browser.

ಅಂದು ಕುಸ್ತಿ ಇಂದು ದೋಸ್ತಿ: ಈ ಸಂಗತಿ ಮರೆತು ಹೋಯ್ತೆ?

05:53 PM Jul 28, 2024 IST | Samyukta Karnataka
ಅಂದು ಕುಸ್ತಿ ಇಂದು ದೋಸ್ತಿ  ಈ ಸಂಗತಿ ಮರೆತು ಹೋಯ್ತೆ

ಹಿಂದೆ ಕುಸ್ತಿ ಮಾಡಿದವರೇ ಇಂದು ದೋಸ್ತಿ ಮಾಡುತ್ತಿರುವವರು, ಆದರೆ ಕುಸ್ತಿ ಕಾಲದ ಸಾಕ್ಷಿಗಳು ಇಂದಿಗೂ ಹಾಗೆಯೇ ಇವೆ!

ಬೆಂಗಳೂರು: ಇಂದಿನ ದೊಸ್ತಿಗಳು ಅಂದು ಅವರವರ ಹಗರಣಗಳು ಅವರವರೇ ಅನಾವರಣಗೊಳಿಸಿದ್ದರು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಜೆಡಿಎಸ್ & ಬಿಜೆಪಿ, ಹಿಂದೆ ಕುಸ್ತಿ ಮಾಡಿದವರೇ ಇಂದು ದೋಸ್ತಿ ಮಾಡುತ್ತಿರುವವರು, ಆದರೆ ಕುಸ್ತಿ ಕಾಲದ ಸಾಕ್ಷಿಗಳು ಇಂದಿಗೂ ಹಾಗೆಯೇ ಇವೆ!

ಈ ದೋಸ್ತಿಗಳು ಕುಸ್ತಿ ಆಡುತ್ತಿದ್ದ ಸಂದರ್ಭದಲ್ಲಿ ಅವರವರ ಹಗರಣಗಳು ಅವರವರೇ ಅನಾವರಣಗೊಳಿಸಿದ್ದರು, ಕುಮಾರಸ್ವಾಮಿ ಅವರು ಮೂಡಾದಲ್ಲಿ ಭಾರಿ ಭೂಕಬಳಿಕೆ ಮಾಡಿದ್ದಾರೆ ಎಂದು ಕರ್ನಾಟಕ ಬಿಜೆಪಿ ಪಕ್ಷವೇ ವಿವರಗಳ ಸಮೇತ ಕರಪತ್ರ ಹಂಚಿತ್ತು. ಆದರೆ ಈಗ ಬಿಜೆಪಿ ನಾಯಕರಿಗೆ ಈ ಸಂಗತಿ ಮರೆತು ಹೋಯ್ತೆ? ತಾವೇ ಭ್ರಷ್ಟಾಚಾರದ ಆರೋಪ ಮಾಡಿ ಅದೇ JD(S)ಯಾವರೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಅನೈತಿಕ ರಾಜಕಾರಣವಲ್ಲವೇ? ಬಿಜೆಪಿ ನಾಯಕರು JD(S) ಯವರ ವಿರುದ್ಧ ಪಾದಯಾತ್ರೆ ಮಾಡುವುದು ಯಾವಾಗ? ಈ ಭೂಕಬಳಿಕೆಯನ್ನು ಪ್ರಶ್ನೆ ಮಾಡುವುದು ಯಾವಾಗ? ಬಿಜೆಪಿಯದ್ದು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣತೆ ಎಂದು ನಿರೂಪಿಸುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.