For the best experience, open
https://m.samyuktakarnataka.in
on your mobile browser.

ಅಗ್ನಿವೀರ್‌: ಗುಡ್‌ನ್ಯೂಸ್ ನೀಡಿದ ಕೇಂದ್ರ

05:16 PM Jul 24, 2024 IST | Samyukta Karnataka
ಅಗ್ನಿವೀರ್‌  ಗುಡ್‌ನ್ಯೂಸ್ ನೀಡಿದ ಕೇಂದ್ರ

ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) / ರೈಫಲ್‌ಮ್ಯಾನ್ ಹುದ್ದೆಗೆ ನೇಮಕಾತಿಯಲ್ಲಿ ಮಾಜಿ ಅಗ್ನಿವೀರ್‌ಗಳಿಗೆ 10% ಖಾಲಿ ಹುದ್ದೆಗಳನ್ನು ಕಾಯ್ದಿರಿಸಲು ನಿರ್ಧರಿಸಲಾಗಿದೆ. ಅಸ್ಸಾಂ ರೈಫಲ್ಸ್ ಇದರ ಹೊರತಾಗಿ, ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಮತ್ತು ದೈಹಿಕ ದಕ್ಷತೆಯ ಪರೀಕ್ಷೆಯಿಂದ ವಿನಾಯಿತಿಯನ್ನು ಸಹ ಮಾಡಲಾಗಿದೆ, ಗೃಹ ಸಚಿವಾಲಯ ತೆಗೆದುಕೊಂಡ ನಿರ್ಧಾರದ ಅನುಸಾರ, ಮಾಜಿ ಅಗ್ನಿವೀರರನ್ನು ಪಡೆಗೆ ಸೇರಿಸಿಕೊಳ್ಳಲು ಸಿಐಎಸ್ಎಫ್ ಸಜ್ಜಾಗಿದೆ. ಕಾನ್ಸ್ಟೇಬಲ್ ಹುದ್ದೆಗಳಲ್ಲಿ ಶೇ.10ರಷ್ಟು ಮೀಸಲಾತಿ & ವಯಸ್ಸು ಹಾಗು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು CISF ತಿಳಿಸಿದೆ.