For the best experience, open
https://m.samyuktakarnataka.in
on your mobile browser.

ಅನುಮಾನ ನನ್ನೊಬ್ಬನದ್ದೇ ಅಲ್ಲ, 7ಕೋಟಿ ಕನ್ನಡಿಗರದ್ದೂ ಕೂಡ

05:15 PM Aug 17, 2024 IST | Samyukta Karnataka
ಅನುಮಾನ ನನ್ನೊಬ್ಬನದ್ದೇ ಅಲ್ಲ  7ಕೋಟಿ ಕನ್ನಡಿಗರದ್ದೂ ಕೂಡ

ಬೆಂಗಳೂರು: ಮುಡಾ ಪ್ರಕರಣದಲ್ಲಿ ಯಾವುದೇ ಲೋಪದೋಷ ಆಗಿಲ್ಲ ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಈ ಪ್ರಾಸಿಕ್ಯೂಷನ್ ಕಾನೂನು ವಿರುದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ಮಾನ್ಯ ರಾಜ್ಯಪಾಲರು ಯಾಕಿಷ್ಟು ಧಾವಂತದಲ್ಲಿದ್ದಾರೆ ಎನ್ನುವ ಅನುಮಾನ ನನ್ನೊಬ್ಬನದ್ದೇ ಅಲ್ಲ, 7ಕೋಟಿ ಕನ್ನಡಿಗರದ್ದೂ ಕೂಡ. NDA ನಾಯಕರ ವಿರುದ್ಧದ ದೂರಿನ ಪ್ರತಿಗಳು ರಾಜಭವನದಲ್ಲಿ ಧೂಳು ಹಿಡಿಯುತ್ತಿದ್ದರೂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಆತುರ ಆತುರವಾಗಿ ತನಿಖೆಗೆ ಆದೇಶಿಸಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ಎನ್ನುವುದರಲ್ಲಿ ಯಾವುದೇ ಸಂದೇಯವಿಲ್ಲ. ಇಂತಹ ಕ್ಷುದ್ರ ಪ್ರಯತ್ನಗಳನ್ನು ನಾವು ಧೈರ್ಯವಾಗಿ ಎದುರಿಸುತ್ತೇವೆ. ಸತ್ಯದ ದಾರಿಯಲ್ಲಿ ನಡೆಯುತ್ತಿರುವ ನಮಗೆ ಯಾವುದೇ ಭಯವಿಲ್ಲ ಎಂದಿದ್ದಾರೆ.

Tags :