For the best experience, open
https://m.samyuktakarnataka.in
on your mobile browser.

ಆರ್‌ಎಫ್‌ಒ ಮನೆ ಮೇಲೆ ಲೋಕಾ ದಾಳಿ

10:12 AM Mar 27, 2024 IST | Samyukta Karnataka
ಆರ್‌ಎಫ್‌ಒ ಮನೆ ಮೇಲೆ ಲೋಕಾ ದಾಳಿ

ಧಾರವಾಡ: ಇಲ್ಲಿಯ ಅರಣ್ಯ ಇಲಾಖೆಯ ಆರ್ ಎಫ್ ಓ ಮನೆ ಹಾಗೂ ಕಚೇರಿ ಮೇಲೆ ಬುಧವಾರ ಬೆಳ್ಳಂ ಬೆಳಗ್ಗೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.
ಆರ್‌ಎಫ್‌ಒ ಅಧಿಕಾರಿ ಮಹೇಶ್ ಹಿರೇಮಠ್ ಎಂಬುವವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಇಲ್ಲಿಯ ಕುಮಾರೇಶ್ವರ‌ ನಗರದ ಅವರ ನಿವಾಸ ಮತ್ತು ಕಚೇರಿ ಮೇಲೆ ಮುಂಜಾನೆ ೭ಕ್ಕೆ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.
ಲೋಕಾಯುಕ್ತ ಎಸ್ಪಿ ಶಂಕರ್ ರಾಗಿ ನೇತೃತ್ವದಲ್ಲಿ ದಾಳಿ ನಡೆಸಿದ್ದು ಅಕ್ರಮ ಆಸ್ತಿ ಸೇರಿದಂತೆ ಹಲವು ಕಡತಗಳ ಪರಿಶೀಲನೆ ಮಾಡಲಾಗುತ್ತಿದೆ.