ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಏನ್ ನಡೀತಾ ಇದೆ ಅಲ್ಲಿ…?

02:30 AM Jun 15, 2024 IST | Samyukta Karnataka

ದೇವ ಲೋಕದಲ್ಲಿ ದಿಗ್ಭ್ರಾಂತರಾಗಿ ಕುಳಿತಿರುವ ಎಲ್ಲರೂ ಅಲ್ಲಿ ಏನೋ ನಡೀತಿದೆ. ಏನು ಅಂತ ಗೊತ್ತಾಗುತ್ತಿಲ್ಲ. ಯಾರಿಗಾದರೂ ಕೇಳಿ ನೋಡೋಣ ಎಂದು ಲೋಕದ ಮುಖ್ಯಸ್ಥನಿಗೆ ನೆನಪಾಗಿದ್ದು ಕಿವುಡನುಮಿ. ಆಕೆ ಟಿವಿಯಲ್ಲಿ ಮಾತನಾಡುವುದನ್ನು ನೋಡಿದ್ದೇನೆ. ಆಕೆಯ ಜೋರು ಧ್ವನಿ, ಮಾತಿನ ಏರಿಳಿತ, ಮಾತು ಹೇಳುವ ಸ್ಟೈಲು ಎಲ್ಲವನ್ನೂ ನಾನು ನೋಡಿದ್ದೇನೆ. ಆಕೆಯೇ ಸೂಕ್ತ ಎಂದು ಆಕೆಯ ಮೊಬೈಲ್‌ಗೆ ಡೈಲ್ ಮಾಡಿ ಕಿವುಡನುಮಮ್ಮ ನಾನು ಅಂದಾಗ.. ಅಯ್ಯೋ ಖುಷಿಆಯ್ತು ಹೇಳಿ ಅಂದಳು. ಏನ್ ನಡೀತಾ ಇದೆ ಅಲ್ಲಿ ಎಂದು ಕೇಳಿದ ಕೂಡಲೇ ಗಂಟಲು ಸರಿಮಾಡಿಕೊಂಡು ಮೈಕನ್ನು ಮುಖಕ್ಕೆ ಇಟ್ಟುಕೊಂಡು ಆಕಾಶ ನೋಡುತ್ತ
ಸ್ವಾಮೇರಾ…. ಇಲ್ಲಿ ಏನು ನಡಿಯಬಾರದೋ ಅದೆಲ್ಲ ನಡೀತಾ ಇದೆ. ಸೋದಿ ಮಾಮೋರಿಗೆ ಪೂರ್ಣ ಸಿಗಲಿಲ್ಲ ಆದರೂ ಅವರು ಬಿಡಲಿಲ್ಲ. ಕೆಂಪುಡುಗ ಈ ಬಾರಿ ಚಿಗಿಚಿಗಿ ಚಿಗರಿದ್ದಾರೆ. ಅವರಮ್ಮನೂ ಕೂಡ ಏನ್ಮಾಡ್ತೀಯ ಮಾಡು ಕಂದ ಅಂದಿದ್ದಾರೆ. ಇನ್ನು ಈ ಕಡೆ ಮಾತ್ರ ಭಯಂಕರ…ಮದ್ರಾಮಣ್ಣೋರು ಬಂಡೆ ಕುಮಾರ ಅವರಿಗೆ ಒಂಭತ್ತು ಒಂಭತ್ತು ಒಂಭತ್ತು ತೋಳ ಹಳ್ಳಕ್ಕೆ ಬಿತ್ತು ಅಂತ ಛೇಡಿಸುತ್ತಿದ್ದಾರೆ. ..ಆ ದರ್ಶನ್ನು ಅಂತ ಇದ್ದನಲ್ಲ ಅವನಿಗೆ ಮದ ಏರಿ ಮಾಡಬಾರದ್ದು ಮಾಡಿದ್ದಾನೆ. ಮೈಸೂರಿನ ಕರಿಹುಡುಗ-ಬಿಳಿಹುಡುಗಿ ಇಬ್ಬರೂ ಕೈ ಕೈ ಹಿಡಿದು ಡೈವೋರ್ಸ್ ಅಂತ ಕೂಗಿ ಓಕೆ ಅನಿಸಿಕೊಂಡಿದ್ದಾರೆ. ಆ ಯುವ ಜೋಡಿಯು ನೀ ಬೇಡ..ನೀ ಬೇಡ ಅಂತಿವೆ. ಅಂವ ಕರಿಮಾರಿ ದುರ್ಗ ಹೆಂಡಿತಿ ನೀ ಸುಮ್ನೆ ಕೂಡುತಿ ಅಂದು ಅರ್ಜಿ ಬರೆದಿದ್ದ. ಅವರಿಬ್ಬರಿಗೂ ಹಂಗಲ್ಲದು ಹಿಂಗ ಎಂದು ಕೋರ್ಟು ಹೇಳಿದೆ. ಇನ್ನೂ ಹೇಳೋಕೆ ಏನೇನೋ ಇದೆ. ಇವತ್ತಿಗೆ ಇಷ್ಟೇ ತಿಳಿದುಕೊಳ್ಳಿ. ಮತ್ತೆ ಕಾಲ್ ಮಾಡಿ ವಿಷಯ ತಿಳಿದುಕೊಳ್ಳಿ ಅಂತ ಹೇಳಿ ಕಟ್ ಮಾಡಿದಳು.

Next Article