ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಿತ್ತೂರು ಚನ್ನಮ್ಮ ಮೈದಾನದಲ್ಲಿ (ಈದ್ಗಾ ಇರುವ ಸ್ಥಳ) ಶ್ರೀರಾಮರೂಪಿ ಗಣೇಶ ಪ್ರತಿಷ್ಠಾಪನೆ

01:38 PM Sep 07, 2024 IST | Samyukta Karnataka

ಹುಬ್ಬಳ್ಳಿ : ಇಲ್ಲಿನ ಮೂರುಸಾವಿರಮಠದಿಂದ ಅದ್ಧೂರಿ ಮೆರವಣಿಗೆಯಲ್ಲಿ ಕರೆತಂದ ಶ್ರೀರಾಮರೂಪಿ ಗಣೇಶ ಮೂರ್ತಿಯನ್ನು ಕಿತ್ತೂರು ಚನ್ನಮ್ಮ ಮೈದಾನ ( ಈದ್ಗಾ ಇರುವ ಸ್ಥಳ ) ದಲ್ಲಿ ಪ್ರತಿಷ್ಠಾಪನೆ ಪೂಜಾ ವಿಧಾನಗಳನ್ನು ನೆರವೇರಿಸಿ ಕಿತ್ತೂರು ಚನ್ನಮ್ಮ ಮೈದಾನ ಗಜಾನನ ಮಂಡಳಿಯು ಪ್ರತಿಷ್ಠಾಪನೆ ಮಾಡಿತು.
ಮೂರುಸಾವಿರಮಠದ ಬಳಿ ಗಣೇಶನ ಭವ್ಯ ಮೆರವಣಿಗೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
ಬಳಿಕ ವಿವಿಧ ವಾದ್ಯವೃಂದ ಜಯಘೋಷಗಳೊಂದಿಗೆ ಸಾಗಿ ಬಂದ ಗಣೇಶಮೂರ್ತಿಯನ್ನು ಅದ್ಧೂರಿಯಾಗಿ ಚನ್ನಮ್ಮ ಮೈದಾನಕ್ಕೆ ಬರಮಾಡಿಕೊಳ್ಳಲಾಯಿತು.
ಕಿತ್ತೂರು ಚನ್ನಮ್ಮ ಮೈದಾನ ಗಜಾನನ ಮಂಡಳಿ ಅದ್ಯಕ್ಷ ಸಂಜು ಬಡಸ್ಕರ್, ಶಾಸಕ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಉದ್ಯಮಿ ಡಾ.ವಿಎಸ್ ವಿ ಪ್ರಸಾದ್ , ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ,ಅವರ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು.ಗಜಾನನ ಮಂಡಳಿ ಸದಸ್ಯರು ಇದ್ದರು.

Next Article