For the best experience, open
https://m.samyuktakarnataka.in
on your mobile browser.

ಕೃಷ್ಣಮೃಗ ಬೇಟೆಗಾರರ ಬಂಧನ

08:09 PM Jun 15, 2024 IST | Samyukta Karnataka
ಕೃಷ್ಣಮೃಗ ಬೇಟೆಗಾರರ ಬಂಧನ

ಬಾಗಲಕೋಟೆ(ಜಮಖಂಡಿ): ಕೃಷ್ಣಮೃಗವನ್ನು ಬೇಟೆಯಾಡಿ ಸಾಗಿಸುತಿದ್ದ 7 ಜನರನ್ನು ಸ್ಥಳೀಯ ಉಪವಲಯ ಅರಣಾಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಾಯಬಾಗ ತಾಲೂಕಿನ ಕಡಕಬಾವಿ ಗ್ರಾಮದ ಸುಭಾಸ ಸಿದ್ದಪ್ಪ ಪಿಡಾಯಿ(೨೩), ಬ್ಯಾಕೋಡ ಗ್ರಾಮದ ಸುರೇಶ ನಿಂಗಪ್ಪ ಪಕಾಂಡೆ(೨೧), ಚೇತನ ಹಣಮಂತ ಬಿದರಿ(೨೪), ಕಂಕಣವಾಡಿ ಗ್ರಾಮದ ನಿಂಗಪ್ಪ ಲಕ್ಷ್ಮಣ ಪಡತಾರೆ(೨೪), ದೇವಪ್ಪರಟ್ಟಿ ಗ್ರಾಮದ ಪ್ರಜ್ವಲ ಬಾಳಪ್ಪ ಮೆಳವಂಕಿ(೧೮), ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಶಬ್ಬಿರ್ ಅಬ್ದುಲ್‌ಸಾಬ್ ಗುಡ್ಡದಮನಿ(೨೫), ರಮಜಾನಸಾಬ್ ಇಮಾಮ್‌ಸಾಬ್ ಅಲಸ್(೨೫) ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಳಿಂಗಳಿ ಗ್ರಾಮದ ಲಾಲಸಾಬ್ ಸರ್ದಾರಸಾಬ್ ಗುಡ್ಡದಮನಿ, ಹನಗಂಡಿ ಗ್ರಾಮದ ರಮಜಾನ್‌ಸಾಬ್ ಇಸ್ಮಾಯಿಲ್‌ಸಾಬ್ ಅಲಾಸ್ ತಪ್ಪಿಸಿಕೊಂಡಿದ್ದಾರೆ ಎಂದು ಅರಣ್ಯಅಧಿಕಾರಿಗಳು ತಿಳಿಸಿದ್ದಾರೆ.