For the best experience, open
https://m.samyuktakarnataka.in
on your mobile browser.

ಚುನಾವಣಾ ಸಮಯದಲ್ಲಿ ಗೊಂದಲ ಸಹಜ

01:11 PM Mar 30, 2024 IST | Samyukta Karnataka
ಚುನಾವಣಾ ಸಮಯದಲ್ಲಿ ಗೊಂದಲ ಸಹಜ

ಹುಬ್ಬಳ್ಳಿ: ಚುನಾವಣೆಯ ಸಂದರ್ಭದಲ್ಲಿ ಗೊಂದಲ, ಅಸಮಾಧಾನ ಸಹಜ. ಅಂತೆಯೇ ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಇರುವ ಕೆಲ ಗೊಂದಲಗಳನ್ನು ರಾಷ್ಟ್ರೀಯ ನಾಯಕರು ಪರಿಹರಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಲ್ಲುವ ಪಕ್ಷದಲ್ಲಿ ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಾಗಿ ಇರುತ್ತದೆ. ಎಲ್ಲರೂ ಪಕ್ಷಕ್ಕಾಗಿ ದುಡುದಿದ್ದಾರೆ. ಆದರೆ, ಪಕ್ಷದ ನಿರ್ಣಯವೇ ಅಂತಿಮ ಎಂದರು.
ಮಂಡ್ಯ ಟಿಕೆಟ್ ವಿಚಾರದ ಕುರಿತಂತೆ ಸುಮಲತಾ ಅವರನ್ನು ಸಮಾಧಾನಗೊಳುಸುವ ಕೆಲಸ ನಿರಂತರವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರು ಬಳಸುತ್ತಿರುವ ಭಾಷೆ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಈಗಾಗಲೇ ಅಮಿತ್‌ ಶಾ ವಿರುದ್ದದ ಪ್ರಕರಣವನ್ನು ಕೋರ್ಟ್ ವಜಾ ಮಾಡಿದ್ದು ಅವರು ಅಪರಾಧಿಯಲ್ಲ ಎನ್ನುವುದು ಸಾಬೀತಾಗಿದೆ. ವಿನಾಃಕಾರಣ ಅಮಿತ್ ಶಾ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಚುನಾವಣೆ ಕಾವಿನಲ್ಲಿ ವಿರೋಧಿಗಳನ್ನು ಟೀಕಿಸುವ ಭರದಲ್ಲಿ ನಾಲಗೆಯ ಮೇಲೆ ಹಿಡಿತ ಕಳೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.