ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಧಾರವಾಡಕ್ಕೆ ಪಾಲಿಕೆ ಘೋಷಣೆಯ `ಪೇಡಾ'

04:29 AM Dec 13, 2023 IST | Samyukta Karnataka

ಏಕೆ ಪಾಲಿಕೆ ಅಗತ್ಯ?
ಹುಬ್ಬಳ್ಳಿ-ಧಾರವಾಡ ಪಾಲಿಕೆಯನ್ನು ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡುವುದು ಪ್ರಸಕ್ತ ಸಂದರ್ಭದಲ್ಲಿ ಅನಿವಾರ್ಯ ಎಂದು ಶಾಸಕ ಅರವಿಂದ ಬೆಲ್ಲದ ಮಂಗಳವಾರ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟರು.
ನಿಯಮಾನುಸಾರ ಧಾರವಾಡದ ಜನಸಂಖ್ಯೆ ೩ ಲಕ್ಷ ದಾಟಿದೆ. ರಾಜಸ್ವ ವಾರ್ಷಿಕ ೬ ಕೋಟಿಯನ್ನು ಎಂದೋ ಮೀರಿದೆ. ಶೈಕ್ಷಣಿಕ ನಗರದ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಪಾಲಿಕೆ ಮಾಡಿ' ಎಂದು ಬೆಲ್ಲದ ಸರ್ಕಾರಕ್ಕೆ ಆಗ್ರಹಿಸಿದರು. ಒಪ್ಪಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್,ಪಾಲಿಕೆಗೆ ಬೇಕಾಗುವ ಎಲ್ಲ ಮಾನದಂಡಗಳು ಧಾರವಾಡಕ್ಕೆ ಇವೆ. ಆದ್ದರಿಂದ ಇದನ್ನು ಪಾಲಿಕೆಯನ್ನಾಗಿಸುತ್ತೇವೆ' ಎಂದು ಹೇಳಿ ಧಾರವಾಡಿಗರಿಗೆ ಸಿಹಿಸುದ್ದಿ ನೀಡಿದರು.

Next Article