ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪಶ್ಚಿಮವಾಹಿನಿ ಕೋದಂಡ ರಾಮನ ದೇಗುಲದಲ್ಲಿ‌ ವಿಶೇಷ ಪೂಜೆಯೊಂದಿಗೆ ಭಜನೆ

04:45 PM Jan 22, 2024 IST | Samyukta Karnataka

ಶ್ರೀರಂಗಪಟ್ಟಣ : ಅಯೋದ್ಯಯಲ್ಲಿನ ಶ್ರೀ ಬಾಲರಾಮ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಪಟ್ಟಣದ ಹೊರವಲಯದ ಪಶ್ಚಿಮವಾಹಿನಿಯ ಕಾವೇರಿ‌ ನದಿ ತೀರದಲ್ಲಿನ‌ ಶ್ರೀ ಕೋದಂಡರಾಮ ದೇಗುಲದಲ್ಲಿ ವಿಶೇಷ ಪೂಜೆಗಳು ಜರುಗಿದವು.
ಪುರಸಭೆ ಮಾಜಿ ಸದಸ್ಯೆ ಕಾವೇರಮ್ಮ‌ ಶೇಷಾದ್ರಿ‌ ನೇತೃತ್ವದಲ್ಲಿ ಶ್ರೀರಾಮನಿಗೆ ಪುಣ್ಯಾಹ, ಪಂಚಾಮೃತ ಅಭಿಷೇಕ, ಹೂವಿನ ಅಭಿಷೇಕ ಹಾಗೂ ದೀಪಾರತಿ‌ ಬೆಳಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ಪೂಜಾ ವೇಳೆ ಶ್ರೀಹರಿ ಭಜನಾ ಮಂಡಳಿ ಮತ್ತು ಶ್ರೀಂಗನಾಯಕಿ ಸ್ತ್ರೀ‌ ಸಮಾಜದ ವತಿಯಿಂದ 50ಕ್ಕೂ ಹೆಚ್ಚು ಮಹಿಳೆಯರು‌‌ ಶ್ರೀರಾಮ ಹಾಗೂ ಹನುಮ‌ ಜಪ ಮಾಡುವುದರ ಜೊತೆಗೆ ಶ್ರೀರಾಮನ‌ ಕುರಿತು ಭಜನೆ ಮಾಡಿದರು. ಭಜನೆಯಲ್ಲಿ ಭಾಗವಹಿಸಿದ್ದವರಿಗೆ ಹಾಗೂ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಅನ್ನತರ್ಪಣೆ ಏರ್ಪಡಿಸಲಾಗಿತ್ತು. ವಿಶೇಷವಾಗಿ‌ ಅಲಂಕೃತಗೊಂಡಿದ್ದ ಶ್ರೀ ಕೋದಂಡರಾಮನನ್ನು ನೂರಾರು ಭಕ್ತರು ಕಣ್ತಂಬಿಕೊಂಡು ಪ್ರಾರ್ಥನೆ ಸಲ್ಲಿಸಿದರು.

Next Article