ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪೋಲೀಸ್ ಇಲಾಖೆಗೆ ಇಸಾಫ್ ಫೈನಾನ್ಸ್ ಬ್ಯಾಂಕ್‌ನಿಂದ 12 ಬ್ಯಾರಿಕೇಟ್ ಕೊಡುಗೆ

05:15 PM Dec 16, 2023 IST | Samyukta Karnataka

ಶ್ರೀರಂಗಪಟ್ಟಣ: ಪಟ್ಟಣದ ಪೋಲೀಸ್ ಠಾಣೆಗೆ ಇಸಾಫಾ ಫೈನಾನ್ಸ್ ಬ್ಯಾಂಕ್ ವತಿಯಿಂದ ವಲಯ ವ್ಯವಸ್ಥಾಪಕ ಹೇಮು ಕುಮಾರ್ 12 ಬ್ಯಾರಿಕೇಟ್ ಗಳನ್ನು ಕೊಡುಗೆಯಾಗಿ ನೀಡಿದರು.
ಪಟ್ಟಣದ ಇಸಾಫಾ ಬ್ಯಾಂಕಿನ‌‌ ಎದುರು ಟೌನ್ ವೃತ್ತ ನಿರೀಕ್ಷಕ‌ ಪ್ರಕಾಶ್ ಮತ್ತು ಸಿಬ್ಬಂಧಿಗೆ ಬ್ಯಾರಿಕೇಟ್ ಗಳನ್ನು ನೀಡಿ ಮಾತನಾಡಿದ ಅವರು,‌ ಸಾಮಾಜಿಕ ಹಾಗೂ ಸಾರ್ವಜನಿಕ ಸದುದ್ದೇಶದ‌ ಕೆಲಸ ಕಾರ್ಯಗಳಿಗೆ ಇಸಾಫಾ ಬ್ಯಾಂಕ್ ಯಾವಾಗಲೂ ಸಿದ್ದವಿದೆ. ಬ್ಯಾಂಕಿನ ಆದಾಯದ ಒಂದು ಭಾಗದಲ್ಲಿ‌ ಸಾರ್ವಜನಿಕ‌‌‌ ಸೇವೆಗಳಗೆ ಈ ಮೂಲಕ ಕೈ ಜೋಡಿಸುತ್ತಿದ್ದು, ಪೋಲೀಸ್ ಇಲಾಖೆಗೆ ನಮ್ಮ ಬ್ಯಾಂಕಿನ‌ ಸಹಕಾರ ಸಾರ್ವಜನಿಕವಾಗಿ‌ ಹೆಚ್ಚಿನ ಅನುಕೂಲವಾಗಲಿದೆ ಎಂದು‌ ಅವರು ಅಭಿಪ್ರಾಯಪಟ್ಟರು.
ಬ್ಯಾರಿಕೇಟ್ ಗಳನ್ನು ಸ್ವೀಕರಿಸಿ ಮಾತನಾಡಿದ ಟೌನ್ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ‌ ಪ್ರಕಾಶ್, ಸಾರ್ವಜನಿಕ‌ವಾಗಿ ಇಲಾಖೆಗೆ ಅಗತ್ಯವಾಗಿರುವ ಬ್ಯಾರಿಕೇಟ್ ಗಳನ್ನು ಇಸಾಫಾ ಬ್ಯಾಂಕ್
ನೀಡುತ್ತಿರುವುದು ಸ್ವಾಗತಾರ್ಹ. ಇವುಗಳನ್ನು‌ ಅತ್ಯಗತ್ಯವಿರುವ ಪಟ್ಟಣದ ಆಯಕಟ್ಟಿನ ಪ್ರದೇಶ ಹಾಗೂ ಹೆದ್ದಾರಿಯ ಪ್ರಮುಖ ಸ್ಥಳಗಳಲ್ಲಿ ಬಳಸಿಕೊಳ್ಳುವುದಾಗಿ ತಿಳಿಸಿದರು.
ಈ ವೇಳೆ ಶಾಖಾ ವ್ಯವಸ್ಥಾಪಕ‌ ಮಂಜು ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Next Article