For the best experience, open
https://m.samyuktakarnataka.in
on your mobile browser.

ಬಿಜೆಪಿ ಮುರುಕಲು ಮನೆ

04:42 PM Dec 26, 2023 IST | Samyukta Karnataka
ಬಿಜೆಪಿ ಮುರುಕಲು ಮನೆ

ಹುಬ್ಬಳ್ಳಿ: ತಮ್ಮ ಪಕ್ಷದ ನಾಯಕರ ಮೇಲೆ ಹಿಡಿತ ಕಳೆದುಕೊಂಡಿರುವ ಬಿಜೆಪಿ ಹೈಕಮಾಂಡ ರಾಜ್ಯದ ಬಿಜೆಪಿ ನಾಯಕರಲ್ಲಿರುವ ಬಿಕ್ಕಟ್ಟನ್ನು ಸರಿಪಡಿಸಲಾಗದೆ ಮುರುಕಲು ಮನೆಯಾಗಿದೆ. ಮೊದಲು ತಮ್ಮ ಮನೆ ಸದಸ್ಯರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಿ ನಂತರ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಿಸುವ ಬಗ್ಗೆ ಕೇಂದ್ರ ಸಚಿವರು ಹೇಳಿಕೆ ನೀಡಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಕುಟುಕಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನೀಡಿದ ಕಾಂಗ್ರೆಸ್‌ನ್ನು ಕಸದ ಬುಟ್ಟಿಗೆ ಸೇರಿಸುವ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಶಾಸಕ ಅಬ್ಬಯ್ಯ, ಇತ್ತೀಚೆಗೆ ನಡೆದ ಪಂಚರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ತೆಲಂಗಾಣದಲ್ಲಿ ಮಾತ್ರ ಜಯ ಸಾಧಿಸಿರಬಹುದು. ಆದರೆ, ಪಂಚರಾಜ್ಯಗಳಲ್ಲಿ ಬಿಜೆಪಿಗೂ ಕಾಂಗ್ರೆಸ್‌ಗೂ ಶೇಕಡಾವಾರು ಮತಗಳಲ್ಲಿ ಹೆಚ್ಚು ಅಂತರವಿಲ್ಲ ಎಂಬುದನ್ನು ಮರೆಯಬಾರದು. ಪಕ್ಷಕ್ಕೆ ಸ್ವಾತಂತ್ರ‍್ಯ ಪೂರ್ವದಿಂದಲೂ ದೊಡ್ಡ ಇತಿಹಾಸವಿದೆ. ಅಧಿಕಾರದ ಆಸೆಗೆ ಕಾಂಗ್ರೆಸ್ ಯಾವತ್ತು ತನ್ನ ನಿಲುವು ಕಳೆದುಕೊಂಡಿಲ್ಲ. ಕಾಂಗ್ರೆಸ್ ಒಂದು ಬಸ್ಟ್ಯಾಂಡ್ ಇದ್ದಂತೆ ಎಂದು ಹೇಳಿರುವ ಕೇಂದ್ರ ಸಚಿವರು ತಮ್ಮ ಬಿಜೆಪಿ ಪಕ್ಷಕ್ಕೆ ಬಸ್ಟ್ಯಾಂಡು ಇಲ್ಲ ಬಸ್ಸು ಇಲ್ಲ. ರಾಜ್ಯ ಬಿಜೆಪಿಯು ದಿಕ್ಕು ತಪ್ಪಿ ದಿವಾಳಿಯಾಗಿದೆ ಎಂದು ಲೇವಡಿ ಮಾಡಿದರು.