For the best experience, open
https://m.samyuktakarnataka.in
on your mobile browser.

ಬೆಂಗೇರಿಯಲ್ಲಿ ವಾಲ್ಮೀಕಿ ಭವನ

01:54 PM Mar 15, 2024 IST | Samyukta Karnataka
ಬೆಂಗೇರಿಯಲ್ಲಿ ವಾಲ್ಮೀಕಿ ಭವನ

ಹುಬ್ಬಳ್ಳಿ: ಬೆಂಗೇರಿಯಲ್ಲಿ ಅಂದಾಜು ರೂ. 50 ಲಕ್ಷ ವೆಚ್ಚದ ವಾಲ್ಮೀಕಿ ಭವನ ನಿರ್ಮಾಣವಾಗಲಿದೆ ಎಂದು ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಜಲಸಂಪನ್ಮೂಲ ಇಲಾಖೆ ಹಾಗೂ ನೀರಾವರಿ ನಿಗಮ ಸಹಯೋಗದೊಂದಿಗೆ 2021-22 ಸಾಲಿನ ಪರಿಶಿಷ್ಟ ಪಂಗಡದ ಯೋಜನೆ ಅಡಿಯಲ್ಲಿ ಇಂದು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಬೆಂಗೇರಿಯಲ್ಲಿ ಅಂದಾಜು ರೂ. 50 ಲಕ್ಷ ವೆಚ್ಚದ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಚಾಲನೆ ನೀಡಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಹು-ಧಾ ಪಾಲಿಕೆ ಸದಸ್ಯ ಎಂ.ವೈ. ನರಗುಂದ, ಪಕ್ಷದ ಪ್ರಮುಖರಾದ ಅಶೋಕ ವಾಲ್ಮೀಕಿ ಹಾಗೂ ಊರ ಹಿರಿಯರು ಉಪಸ್ಥಿತರಿದ್ದರು ಎಂದಿದ್ದಾರೆ.