For the best experience, open
https://m.samyuktakarnataka.in
on your mobile browser.

ಭಾರತ್​​ ಜೋಡೋ ಯಶಸ್ಸು ಮಾಡಿದವರಿಗೆ ಟಿಕೆಟ್​ ಸಿಗಲಿದೆ : ಡಿ.ಕೆ.ಶಿವಕುಮಾರ್​..!

02:32 PM Sep 16, 2022 IST | Samyukta Karnataka
ಭಾರತ್​​ ಜೋಡೋ ಯಶಸ್ಸು ಮಾಡಿದವರಿಗೆ ಟಿಕೆಟ್​ ಸಿಗಲಿದೆ   ಡಿ ಕೆ ಶಿವಕುಮಾರ್​

ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾತ್ನಾಡಿದ ಡಿಕೆಶಿ, ಗುಬ್ಬಿ, ಶಿರಾ ಸೇರಿ ಎಲ್ಲ ಕ್ಷೇತ್ರಕ್ಕೂ ಅರ್ಜಿ ಹಾಕಲಿ ನಾವ್​​ ಗಮನಿಸುತ್ತೇವೆ. ಪಕ್ಷ ಸಂಘಟನೆ, ಭಾರತ್​​ ಜೋಡೋ ಯಶಸ್ಸು ಮಾಡಿದವರಿಗೆ ಟಿಕೆಟ್​ ಸಿಗಲಿದೆ ಎಂದು ಡಿಕೆಶಿ ಹೇಳಿದ್ದಾರೆ. ಗುಬ್ಬಿ ಕ್ಷೇತ್ರದ ಜೆಡಿಎಸ್​ ಶಾಸಕ ಶ್ರೀನಿವಾಸ್ ಕಾಂಗ್ರೆಸ್​ ಸೇರಲು ಸಜ್ಜಾಗಿದ್ದಾರೆ. ಹೀಗಾಗಿ ಅಭ್ಯರ್ಥಿ ಬಗ್ಗೆ ಕೇಳಿ ಬಂದ ಪ್ರಶ್ನೆಗೆ ಡಿಕೆಶಿ ಈ ಉತ್ತರ ನೀಡಿದ್ದಾರೆ.