For the best experience, open
https://m.samyuktakarnataka.in
on your mobile browser.

ಮೂರು ಶತಕಗಳ ಕಾಯುವಿಕೆ ಅಂತ್ಯ

05:52 PM Feb 01, 2024 IST | Samyukta Karnataka
ಮೂರು ಶತಕಗಳ ಕಾಯುವಿಕೆ ಅಂತ್ಯ

ಹುಬ್ಬಳ್ಳಿ: "ನಂದಿಯ ಜೊತೆಗೆ ಹಿಂದೂಗಳ ಮೂರು ಶತಕಗಳ ಶ್ರದ್ಧೆಯ ಕಾಯುವಿಕೆ ಇಂದು ಅಂತ್ಯವಾಯಿತು" ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.
"ಕಾಶಿ ಜ್ಞಾನವಾಪಿ ಮಂದಿರ"ದಲ್ಲಿ ಪೂಜೆ ನಡೆದಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, "ನಂದಿಯ ಜೊತೆಗೆ ಹಿಂದೂಗಳ ಮೂರು ಶತಕಗಳ ಶ್ರದ್ಧೆಯ ಕಾಯುವಿಕೆ ಇಂದು ಅಂತ್ಯವಾಯಿತು." "ಕಾಶಿ ಜ್ಞಾನವಾಪಿ ಮಂದಿರ"ದಲ್ಲಿ ನ್ಯಾಯಾಲಯದ ಆದೇಶದಂತೆ ಹಿಂದೂ ಸಂಪ್ರದಾಯದಂತೆ ಪೂಜಾ ಕಾರ್ಯ ನೆರವೇರಿದ ಪುಣ್ಯದ ಕ್ಷಣ. ಜೈ ಮಹಾಕಾಲ್.. ಎಂದು ಪೂಜೆ ಸಲ್ಲಿಸುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.