For the best experience, open
https://m.samyuktakarnataka.in
on your mobile browser.

ರಾಜಕೀಯ ನಾಯಕರಲ್ಲಿ ಒಳ್ಳೆತನ ಕಡಿಮೆ

08:43 PM Dec 26, 2023 IST | Samyukta Karnataka
ರಾಜಕೀಯ ನಾಯಕರಲ್ಲಿ ಒಳ್ಳೆತನ ಕಡಿಮೆ

ಕೊಪ್ಪಳ: ರಾಜಕೀಯ ನಾಯಕರಲ್ಲಿಯೂ ಒಳ್ಳೆತನ ಕಡಿಮೆಯಾಗಿದೆ ಎಂದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ನಾಯಕರ ಮೇಲೆ ಮೊದಲಿದ್ದ ಘನತೆ, ಗೌರವ ಕಡಿಮೆಯಾಗಿದೆ. ಆದರು ಬದಲಾದ ಸನ್ನಿವೇಶದಲ್ಲಿ ಕೂಡಾ ನಾವು ಜನರ ಕೆಲಸ ಮಾಡಬೇಕು ಎಂದರು.
ಸದ್ಯ ರಾಜ್ಯದಲ್ಲಿ ಹೊಸ ತಾಲೂಕು, ಹೋಬಳಿಗಳ ಘೋಷಣೆ ಇಲ್ಲ. ಕೆಲವೆಡೆ ಅನಿವಾರ್ಯತೆ ಇಲ್ಲದಿದ್ದರೂ ಪ್ರತಿಷ್ಠೆಗಾಗಿ ಹೊಸ ತಾಲೂಕು ರಚನೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸದ್ಯ ರಾಜ್ಯದಲ್ಲಿ ಹೊಸ ತಾಲೂಕು ರಚನೆ ಸಾಧ್ಯವಿಲ್ಲ. ರಾಜ್ಯದಲ್ಲಿ ಹಿಂದಿನ ಸರ್ಕಾರ ೬೩ ಹೊಸ ತಾಲೂಕುಗಳನ್ನು ಘೋಷಣೆ ಮಾಡಿತ್ತು. ಆದರೆ ಇಂದಿಗೂ ೪೦ ತಾಲೂಕಿಗೆ ಮೂಲಭೂತ ಸೌಕರ್ಯಗಳೇ ಕಲ್ಪಿಸಲಿಲ್ಲ. ಹೀಗಾಗಿ ಮುಂದಿನ ಎರಡ್ಮೂರು ವರ್ಷ ಹೊಸ ತಾಲೂಕುಗಳಿಗೆ ಮೂಲಸೌಕರ್ಯ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ. ವಿಜಯನಗರ ಜಿಲ್ಲೆ ಘೋಷಣೆ ಮಾಡಿದರು. ಆದರೆ ಕಚೇರಿಯೂ ಇಲ್ಲ, ಸಿಬ್ಬಂದಿಯನ್ನೂ ಕೊಡದೇ ಹೋದರು. ಹಿಂದಿನವರು ೬೦೦ ಕೋಟಿ ರೂ. ಹಣವನ್ನು ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿ, ಹೋಗಿದ್ದಾರೆ. ಆದರೆ ಇಲಾಖೆಗೆ ಪ್ರತಿವರ್ಷಕ್ಕೆ ಕಟ್ಟಡ ಕಟ್ಟಲು ಕೇವಲ ೧೨೦ ಕೋಟಿ ರೂ. ಮಾತ್ರ ಅನುದಾನ ಇದೆ ಎಂದರು.