For the best experience, open
https://m.samyuktakarnataka.in
on your mobile browser.

ವಿನಯ ಕುಲಕರ್ಣಿಗೆ ಧಾರವಾಡಕ್ಕೆ ಎಂಟ್ರಿ

03:50 PM May 07, 2024 IST | Samyukta Karnataka
ವಿನಯ ಕುಲಕರ್ಣಿಗೆ ಧಾರವಾಡಕ್ಕೆ ಎಂಟ್ರಿ

ಧಾರವಾಡ: ಶಾಸಕ ವಿನಯ ಕುಲಕರ್ಣಿ ಅವರಿಗೆ ಧಾರವಾಡದಲ್ಲಿ ಮತದಾನ ಮಾಡಲು ನ್ಯಾಯಾಲಯ ಸಮ್ಮತಿಸಿದೆ.
ಬೆಂಗಳೂರು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ಮತದಾನ ಮಾಡಿ ಕೂಡಲೇ ಜಿಲ್ಲೆ ತೊರೆಯುವಂತೆ ನಿರ್ದೇಶನ ನೀಡಿದೆ. ಸಪ್ತಾಪುರ ಶಾರದಾ ಶಾಲೆಯಲ್ಲಿ ನಿರ್ಮಿಸಿದ ಮತಗಟ್ಟೆಯಲ್ಲಿ ವಿನಯ ಕುಲಕರ್ಣಿ ಮತದಾನ ಮಾಡಲಿದ್ದಾರೆ.