For the best experience, open
https://m.samyuktakarnataka.in
on your mobile browser.

ಶಕ್ತಿ ಪ್ರದರ್ಶನದ ಮೂಲಕ ಅಸೂಟಿ ನಾಮತ್ರ ಸಲ್ಲಿಕೆ.

01:44 PM Apr 16, 2024 IST | Samyukta Karnataka
ಶಕ್ತಿ ಪ್ರದರ್ಶನದ ಮೂಲಕ ಅಸೂಟಿ ನಾಮತ್ರ ಸಲ್ಲಿಕೆ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರು ಅದ್ದೂರಿ ಮೆರವಣಿಗೆಯ ಮೂಲಕ ಮಂಗಳವಾರ ನಾಮಪತ್ರ ಸಲ್ಲುಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ವಿನೋದ ಅಸೂಟಿ, ಧಾರವಾಡದ ತುಳಜಾಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಶಿವಾಜಿ ಮಹಾರಾಜರ ಪುತ್ಥಳಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಬಳಿಕ ತೆರೆದ ವಾಹನದಲ್ಲಿ ಅಪಾರ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಶಿವಾಜಿ ವೃತ್ತ, ಟಿಪ್ಪು ಸರ್ಕಲ್, ಸಿಬಿಟಿ, ಅಂಜೂಮನ್ ಸರ್ಕಲ್, ಜುಬಲಿ ವೃತ್ತ, ಕೋರ್ಟ್ ವೃತ್ತದ ಮೂಲಕ ಮೆರವಣಿಗೆ ಸಾಗಿ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಿದರು.

ದಾರಿಯುದ್ದಕ್ಕೂ ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು. ಜೈ ಸಿದ್ದರಾಮಯ್ಯ, ಜೈ ಡಿ.ಕೆ. ಶಿವಕುಮಾರ್ ಹಾಗೂ ಸಂತೋಷ ಲಾಡ್ ಅವರಿಗೆ ಜೈಕಾರ ಹಾಕಿದರು. ಅಲಲ್ಲಿ ಗುಲಾಲು ಎರಚಿ ಸಂಭರಮಿಸಿದರು‌. ಮೆರವಣಿಗೆಗೆ ಜಾನಪದ ಕಲಾ ತಂಡಗಳು ಸಾಥ್ ನೀಡಿದವು.

ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಸಲೀಂ ಅಹ್ಮದ್, ಎ.ಎಂ. ಹಿಂಡಸಗೇರಿ, ಅನಿಕುಮಾರ ಪಾಟೀಲ ಸೇರಿದಂತೆ ಅನೇಕರಿದ್ದರು.