ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶಶೀಲ್ ನಮೋಶಿಗೆ 115 ಮತಗಳಿಂದ ಗೆಲುವು

11:44 PM Mar 17, 2024 IST | Samyukta Karnataka

ಕಲಬುರಗಿ: ಪ್ರತಿಷ್ಠಿತ ಹೈದ್ರಾಬಾದ-ಕರ್ನಾಟಕ ಶಿಕ್ಷಣ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಈಗಾಗಲೇ ನಡೆದ ಮತ ಏಣಿಕೆ ಕಾರ್ಯ ಮುಗಿದಿದ್ದು, ಅಂತಿಮವಾಗಿ ಎಂಎಲ್ಸಿ ಶಶೀಲ್ ನಮೋಶಿ ಅವರು 617 ಮತಗಳು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ ಪ್ರತಿಸ್ಪರ್ಧಿಯಾಗಿದ್ದ ಸಂತೋಷ ಬಲಗುಂದಿ ಅವರು 502 ಮತಗಳು ಪಡೆದು ಅಧ್ಯಕ್ಷ ಸ್ಥಾನದಿಂದ ವಂಚಿತರಾದರೆ ಶರಣಬಸಪ್ಪ ಕಾಮರೆಡ್ಡಿ 249, ರಾಜಶೇಖರ ನಿಪ್ಪಾಣಿ 3 ಮತಗಳು ಪಡೆದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ಪರಾಭವಗೊಂಡರು.
ಅಲ್ಲದೇ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮಾಜಿ ಹೈ.ಕ. ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರ ಪುತ್ರ ರಾಜು ಭೀಮಳ್ಳಿ ಅವರು 847 ಮತಗಳನ್ನು ಪಡೆಯುವ ಮೂಲಕ ಅತೀ ಹೆಚ್ಚು ಮತಗಳ ದಾಖಲೆ ಗೆಲುವು ಪಡೆದಿದ್ದಾರೆ.
ನಮೋಶಿ ಪೇನಾಲ್‌ನಿಂದ ಕೈಲಾಸ್ ಪಾಟೀಲ್ (722), ಅರುಣಕುಮಾರ ಎಂ. ಪಾಟೀಲ್ (690), ಉದಯಕುಮಾರ ಎಸ್. ಚಿಂಚೋಳಿ (668), ರಜನೀಶ ವಾಲಿ (622), ಶರಣಬಸಪ್ಪಾ ಹರವಾಳ (538), ನಿಶಂತ ಎಲಿ (427) ಒಟ್ಟು ಆರು ಜನ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸಂತೋಷ ಬಿಲಗುಂದಿ ಪೆನಾಲ್‌ದಿಂದ ಐದು ಜನ ಮತ್ತು ಡಾ. ಕಾಮರೆಡ್ಡಿ ಪೆನಾಲ್‌ನಿಂದ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ.
ಬಿಲಗುಂದಿ ಪೆನಾಲ್‌ನಿಂದ ಆಯ್ಕೆಯಾದ ಸದಸ್ಯರೆಂದರೆ ಡಾ. ಕಿರಣ ದೇಶಮುಖ 622, ಮಹಾದೇವಪ್ಪ ರಾಮಪುರೆ 614, ಡಾ. ನಾಗೇಂದ್ರ ಎಸ್. ಮಂಠಾಳೆ 567, ಸಾಯಿನಾಥ ಪಾಟೀಲ 530 ಮತ್ತು ಡಾ. ಅನೀಲಕುಮಾರ ಪಟ್ಟಣ 529 ಆಯ್ಕೆಯಾಗಿದ್ದಾರೆ.
ಡಾ. ಕಾಮರೆಡ್ಡಿ ಪೆನಾಲ್‌ದಿಂದ ನಾಗಣ್ಣ ಎಸ್. ಘಂಟಿ (508 ಮತ್ತು ಅನೀಲಕುಮಾರ ಎಸ್. ಮರಗೋಳ 494 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಕಾಮರೆಡ್ಡಿ ಪೆನಾಲ್‌ನಿಂದ ಕಾರ್ಯಕಾರಿ ಸಮತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅನೀಲಕುಮಾರ ಮರಗೋಳ ಅವರು ಕೇವಲ ಒಂದು ಮತದಿಂದ ಜಯಸಾಧಿಸಿದ್ದಾರೆ. ಅವರು ತಮ್ಮ ಸಮೀಪರ ಇಬ್ಬರು ಅಭ್ಯರ್ಥಿಗಳಾದ ಆನಂದ ದಂಡೋತಿ (493) ಮತ್ತು ವಿಜಯಕುಮಾರ ದೇಶಮುಖ (493) ಸಮಾನ ಮತಪಡೆದು ಪರಾಭವಗೊಂಡಿದ್ದಾರೆ.
ರವಿವಾರ 16ರಂದು ಹೈ.ಕ. ಸಂಸ್ಥೆಗೆ ಚುನಾವಣೆ ನಡೆದಿತ್ತು,ಇಂದು ಮುಂಜನೆ 9 ಗಂಟೆಗೆ ಇಲ್ಲಿನ ಸಿಪಿಎಂ ಹಾಸ್ಟೇಲ್ ಕಟ್ಟಡದಲ್ಲಿ ಮತಏಣಿಕೆ ಕಾರ್ಯ ನಡೆದಿತ್ತು.

Next Article