ಸಂಸತ್ತು ಇರುವುದು ಈ ದೇಶಕ್ಕಾಗಿ, ಪಕ್ಷಕ್ಕಾಗಿ ಅಲ್ಲ…
ನವದೆಹಲಿ: ಬಜೆಟ್ 2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಬಲವಾದ ಅಡಿಪಾಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸತ್ನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿರುವ ಅವರು 60 ವರ್ಷಗಳಲ್ಲಿ ಮೂರನೇ ಬಾರಿಗೆ ನಮ್ಮ ಸರ್ಕಾರವು ಮರಳಿದೆ ಮತ್ತು ಬಜೆಟ್ ಮಂಡನೆಯನ್ನು ಮಾಡಲಿದೆ, ಇದು ಭಾರತೀಯ ಪ್ರಜಾಪ್ರಭುತ್ವದ ವೈಭವದ ಪಯಣದಲ್ಲಿ ಅತ್ಯಂತ ಗೌರವಾನ್ವಿತ ಘಟನೆಯಾಗಿದೆ, ಮುಂದಿನ ಐದು ವರ್ಷಗಳ ಕಾಲ ನಾವು ದೇಶಕ್ಕಾಗಿ ಹೋರಾಡಬೇಕು, ಪ್ರಜಾಸೇವಕರಾಗಿ ಹೋರಾಡಬೇಕು ಎಂದು ನಾನು ದೇಶದ ಎಲ್ಲ ಸಂಸದರಲ್ಲಿ ವಿನಂತಿಸಲು ಬಯಸುತ್ತೇನೆ, ಸಂಸತ್ತು ಇರುವುದು ಈ ದೇಶಕ್ಕಾಗಿ, ಪಕ್ಷಕ್ಕಾಗಿ ಅಲ್ಲ. ಈ ಹೊಸ ಸರ್ಕಾರ ರಚನೆಯ ನಂತರ ಇದು ಮೊದಲ ಅಧಿವೇಶನವಾಗಿದ್ದು, 140 ಕೋಟಿ ದೇಶವಾಸಿಗಳು ಬಹುಮತದೊಂದಿಗೆ ನಮಗೆ ಸೇವೆ ಸಲ್ಲಿಸಲು ಆದೇಶಿಸಿದ್ದಾರೆ. ಆದರೆ ಸರ್ಕಾರದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ದೇಶದ ಪ್ರಧಾನಿಯನ್ನು 2.5 ಗಂಟೆಗಳ ಕಾಲ ಅವರ ಧ್ವನಿಯನ್ನು ಹತ್ತಿಕ್ಕಲು ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಇದಕ್ಕಾಗಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು. ಪ್ರತಿಪಕ್ಷಗಳ 'ನಕಾರಾತ್ಮಕ ರಾಜಕಾರಣ'ವನ್ನು ಟೀಕಿಸಿದ ಪ್ರಧಾನಿ, ತಮ್ಮ ವೈಫಲ್ಯಗಳನ್ನು ಮುಚ್ಚಿಡಲು ಸಂಸತ್ನ ಸಮಯವನ್ನು ಬಳಸಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಂತಹ ತಂತ್ರಗಳಿಗೆ ಜಾಗವಿಲ್ಲ ಎಂದು ಕಿಡಿಕಾರಿದರು.