ಸಿಡಿಲು ಬಡಿದು ಯುವಕ ಸಾವು
01:40 PM Oct 09, 2024 IST
|
Samyukta Karnataka
ಬೀದರ್ : ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಎರಗಿ ವಿದ್ಯಾರ್ಥಿಯೋರ್ವ ಸಾವನಪ್ಪಿದ್ದಾನೆ.
ಮುಖೇಶ್ ಮೊಳಕೆರೆ (16) ಸಾವನಪ್ಪಿದ ಯುವಕ. ತನ್ನ ತಾಯಿಯೊಂದಿಗೆ ಹೊಲಕ್ಕೆ ತೆರಳಿದಾಗ ಸಿಡಿಲು ಎರಗಿ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Article