For the best experience, open
https://m.samyuktakarnataka.in
on your mobile browser.

ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ನಿಧನ

03:14 PM Jun 15, 2024 IST | Samyukta Karnataka
ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ನಿಧನ

ಹುಬ್ಬಳ್ಳಿ: ಹಿರಿಯ ಪತ್ರಕರ್ತರಾದ ಮತ್ತಿಹಳ್ಳಿ ಮದನ ಮೋಹನ (೮೩) ಅವರು ಶನಿವಾರ ನಿಧನರಾದರು.
ಎಂ. ಮದನ ಮೋಹನ ಅವರು ಹಿಂದು ಪತ್ರಿಕೆಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ೪೭ ವರ್ಷಗಳ ಕಾಲ ದಿ.ಹಿಂದೂ ಪತ್ರಿಕೆಗೆ ಕರ್ತವ್ಯ ನಿರ್ವಹಿಸಿದ್ದರು. ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ‌ತರುವಲ್ಲಿ ಇವರ ಲೇಖನಗಳು ಪ್ರಧಾನ ಪಾತ್ರ ವಹಿಸಿದ್ದವು. ಮೂಲತಃ ಬಳ್ಳಾರಿಯವರಾದ ಇವರು ೧೯೫೮ ರಲ್ಲಿ ಹುಬ್ಬಳ್ಳಿಗೆ ಬಂದು ಪತ್ರಕರ್ತರಾಗಿ ಕಾರ್ಯ ಆರಂಭಿಸಿದ್ದರು.