ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹೆಚ್ಚುವರಿ ಡಿಜೆ ಬಳಕೆಗೆ ಅವಕಾಶ ನೀಡಿ: ಠಾಣೆ ಮುಂದೆ ಜಮಾಯಿಸಿದ ಯುವಕರು

01:43 PM Sep 16, 2024 IST | Samyukta Karnataka

ಬಾಗಲಕೋಟೆ: ಈದ್ ಮಿಲಾದ್ ಮೆರವಣಿಗೆಯಲ್ಲಿ ೮ ಡಿಜೆ‌ ಬಳಕೆಗೆ ಅವಕಾಶ ನೀಡುವಂತೆ ಕೋರಿ ‌ಮುಸ್ಲಿಂ ಸಮುದಾಯದ ಮುಖಂಡರು, ಯುವಕರು ಶಹರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು.

ಹಳೆ ನಗರದಲ್ಲಿ ಸೋಮವಾರ ಬೃಹತ್‌ ಈದ್ ಮೆರವಣಿಗೆ ನಡೆಯಲಿದ್ದು, ೨ ಡಿಜೆಗೆ ಪೊಲೀಸರು ಅನುಮತಿ ನೀಡಿದ್ದರು, ಆದರೆ ೮ ಡಿಜೆಗಳು ಬಂದಾಗ ಪೊಲೀಸರು ಅನುಮತಿ ಪಡೆದಷ್ಟೇ ಡಿಜೆಗಳನ್ನು ಬಳಸಬೇಕೆಂದು ಸೂಚನೆ ನೀಡಿದರು.

ಆದರೆ ಅಷ್ಟೂ ಡಿಜೆಗಳ ಬಳಕೆಗೆ ಅನುಮತಿ ನೀಡಬೇಕೆಂದು ಪಟ್ಟು‌ ಹಿಡಿದ ಯುವಕರು ಠಾಣೆ ಮುಂದೆ ಜಮಾಯಿಸಿದರು.

ವಿಷಯ ತಿಳಿದು ಠಾಣೆಗೆ ಬಂದ ಎಸ್ಪಿ ವೈ.ಅಮರನಾಥ ರೆಡ್ಡಿ ಅವರು, ಅನುಮತಿ ಇದ್ದಷ್ಟೇ ಡಿಜೆಗಳನ್ನು ಬಳಸಿ. ಅನಗತ್ಯ ಗೊಂದಲ ಮಾಡಿಕೊಳ್ಳಬೇಡಿ ಎಂದು‌ ತಿಳಿಹೇಳಿ ಕಳುಹಿಸಿದರು.

Next Article