For the best experience, open
https://m.samyuktakarnataka.in
on your mobile browser.

9 ಗಂಟೆಯಲ್ಲಿ 31 ಟನ್ ಕಬ್ಬು ಹೇರಿದ ಯುವಕ

08:36 PM Dec 06, 2023 IST | Samyukta Karnataka
9 ಗಂಟೆಯಲ್ಲಿ 31 ಟನ್ ಕಬ್ಬು ಹೇರಿದ ಯುವಕ

ಬಾಗಲಕೋಟೆ(ಕಲಾದಗಿ): ಕೇವಲ 9 ಗಂಟೆಯಲ್ಲಿ 31 ಟನ್ ಕಬ್ಬನ್ನು ತಾನೊಬ್ಬನೇ ಟ್ರ್ಯಾಕ್ಟರ್‌ಗೆ ಲೋಡ್ ಮಾಡುವುದರ ಮೂಲಕ ಸಮೀಪದ ಅಂಕಲಗಿಯ ಅಭಿಷೇಕ ಚಿಕ್ಕಪ್ಪ ಮಾದರ ಸಾಹಸ ಮೆರೆದಿದ್ದಾನೆ.
ಮಂಗಳವಾರದಂದು ಶ್ರೀಕಾಂತ ಮಾದರ ಎಂಬುವವರ ಜಮೀನಿನಲ್ಲಿ ಕಬ್ಬನ್ನು ಕಟಾವು ಮಾಡುತ್ತಿದ್ದಾಗ ಅಭಿಷೇಕ್ ಈ ಸಾಧನೆ ಮಾಡಿದ್ದು, ಗುಲಾಲನ್ನು ತೂರುತ್ತಾ, ಊರಲ್ಲಿ ಮೆರವಣಿಗೆ ಮಾಡಿ ಸಂಭ್ರಮಾಚರಣೆ ಮಾಡಲಾಯಿತು. ಜೊತೆಗೆ ಸಾಧನೆ ಮಾಡಿದ ಯುವಕನನ್ನು ಊರವರು ಬೆಳ್ಳಿಯ ಖಡೆಯನ್ನು ಕೈಗೆ ತೊಡಿಸುವುದರ ಮೂಲಕ ಅಭಿನಂದಿಸಿದರು.